ರಾಮನಗರ : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕನ್ನಡದ ಪರವಾಗಿ ಮತ್ತೊಮ್ಮೆ ಗರ್ಜಿಸಿದ್ದಾರೆ. "ನಮಗೆ ಜೋಡೋ ಸಂಘಗಳ ಅಗತ್ಯವಿಲ್ಲ, ಕನ್ನಡ ನಾಡು-ನುಡಿಗಾಗಿ ಕೆಲಸ ಮಾಡುವ ಕನ್ನಡ ಸಂಘಗಳೇ ಸಾಕು" ಎಂದು ಅವರು ಹೇಳಿದರು.
ಬೆಳಗಾವಿ ಸೇರಿದಂತೆ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಕನ್ನಡ ಸಂಘಟನೆಗಳಿಗೆ ತಲಾ ₹1 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದ ಅವರು, ಕರ್ನಾಟಕದ ಎಲ್ಲಾ ಗಡಿಭಾಗದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಒಟ್ಟು ₹500 ಕೋಟಿ ವಿಶೇಷ ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿದರು.
ಗಡಿಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
"ಗಡಿಭಾಗ ಉಳಿದರೆ ಕನ್ನಡ ಉಳಿಯುತ್ತದೆ; ಕನ್ನಡ ಉಳಿದರೆ ಕರ್ನಾಟಕ ಉಳಿಯುತ್ತದೆ" ಎಂದು ಅವರು ಘೋಷಣೆ ಕೂಗಿದರು.
ಮತ್ತಷ್ಟು ವಿಶೇಷ ಸುದ್ದಿಗಳಿಗೆ ನಮ್ಮ ಕರುನಾಡು ಟಿವಿ ಡಿಜಿಟಲ್ ಚಾನೆಲ್ ಲಿಂಕ್ ಒತ್ತಿರಿ: https://youtu.be/6m1OwsALpL8?si=LsF0lIBgHc09XZm2
#ವಾಟಾಳ್ನಾಗರಾಜ್ #Kannada #Belagavi #BorderDistricts #Karnataka #KannadaSangha #Ramanagara #KannadaPride #KarunaadaTimes